ಮೊದಲು ಬೇಳೆ ಮತ್ತು ತರಕಾರಿಗಳನ್ನು ಚೆನ್ನಗಿ ತೊಳೆದಿಟ್ಟುಕೊಳ್ಳಿ.
ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಯಲು ಇಡಬೇಕು .
ಹುರುಳಿಕಾಯಿಯನ್ನು ಒಂದು ಇಂಚು ಉದ್ದಕ್ಕೆ ಮುರಿದಿಟ್ಟು ಕೊಂಡು, ಕ್ಯಾರೆಟ್ಟಿನ ಮತ್ತು ನವಿಲು ಕೋಸಿನ ಸಿಪ್ಪೆಯನ್ನು ತೆಗೆದು ಅದನ್ನು ಚಿಕ್ಕ ಹೊಳುಗಳನ್ನಾಗಿ ಹೆಚ್ಚಿಟ್ಟುಕೊಳ್ಳಬೇಕು.
ತೊಳೆದಿಟ್ಟ ಬೇಳೆಗೆ 2 ಕಪ್ ನೀರು ,ಅರಿಶಿಣ, 1/4 ಚಮಚ ಎಣ್ಣೆ ಹಾಗು ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ 2 ಕೂಗು ಬರುವಷ್ಟು ಬಿಡಿ.
ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಬೀಜ,ಮಂತ್ಯ ಮತ್ತು ಮೆಣಸಿನ ಕಾಯಿಯನ್ನು ಹಾಕಿ ಮೆಂತ್ಯ ಕೆಂಪಗಾಗುವಷ್ಟು ಹುರಿದಿಟ್ಟುಕೊಳ್ಳಿ .
ಹುರಿದ ಮಸಾಲೆಯನ್ನು ಕಾಯಿ ಮತ್ತು ಹುಣಸೆ ಹಣ್ಣಿನೊಡನೆ ಸುಮಾರಾಗಿ ಸಣ್ನಗೆ ರುಬ್ಬಿಕೊಳ್ಳಿ.
ಕುಕ್ಕರ್ ಆರಿದ ಮೇಲೆ ಬೆಂದ ಬೇಳೆ ಮತ್ತು ತರಕಾರಿಯನ್ನು ಒಂದು ದೊಡ್ಡ ಪಾತ್ರೆಗೆ ತೆಗೆದುಕೊಳ್ಳಿ .
ಅದಕ್ಕೆ ತಿರುವಿಕೊಂಡ ಮಿಶ್ರಣ, ಉಪ್ಪು ಮತ್ತು ನೀರನ್ನು ಹಾಕಿ ಕಲಸಿ ಸುಮಾರಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು .
ಬೇಕಾದಲ್ಲಿ ಕರಿಬೇವಿನ ಸೊಪ್ಪನ್ನೂ ಹಾಕಬಹುದು. ಹುಳಿಯ ಮೇಲುಗಡೆ ನೊರೆ ನೊರೆಯಾಗಿ ಬಂದಾಗ ಉರಿಯನ್ನು ಆರಿಸಿ. ಹುಳಿ ತಯಾರು .